Sunday, July 13, 2008

ಕಂಡವು! ಕೇಳಿದವು!!

ಜನರ ಮೇಲಿನ ದುಡ್ಡು, ನಾಯಿ ತಲೆ ಮೇಲಿನ್ ಬುತ್ತಿ ಇದ್ದ೦ಗೆ

ಕಬ್ಬಿಣ ಬಡಿಯೋತಾವ ನೊಣಕ್ಕೇನ್ ಕೆಲ್ಸ

ತಿಪ್ಪೆಗೆಸೆದ್ರೂ ತಪ್ಪದೆ ಲೆಕ್ಕ ಬರ್ಕೋ

ಆಪತ್ಕಾಲದಲ್ಲಿ ಪಾಪವಿಲ್ಲ (Everything is fair in war and love?!)

ಯಾವಾಗ್ಲೂ ಕಯ್ಗುಡ್ತಿದ್ರೆ ಕಾದಿ ಮನೆ ಕಲ್ಲಿಡಿತು

ಇದ್ರೆ ಕೈತು೦ಬ ಇರ್ಬೇಕು, ಸತ್ರೆ ಗು೦ಡಿ ತು೦ಬ ಇರ್ಬೇಕು

ಗುಳಿಗೆ ಸಿದ್ಧ ಒಳಗೆ ಮೆದ್ದ

ದನ ತಿನ್ನೋನಿಗೆ ಗೊಬ್ಬರದಾಣೆ

ಉಚ್ಚೆ ಹೊಯ್ದು ಏಳೋ ಹೊತ್ತಿಗೆ ಇಪ್ಪತ್ತೈದು ಗ್ಯಾನ

ಬಾಯ್ತುಂಬಾ ತಿಂಬ್ಲಿಲ್ಲ ... ತಿಕುದ್ ತು೦ಬ ಹೇಲ್ಲಿಲ್ಲ

ಮದುವೆಯಾಗದೆ ಹುಚ್ಚು ಬಿಡಲ್ಲ, ಹುಚ್ಚು ಬಿಡದೆ ಮದುವೆಯಾಗಲ್ಲ್

ಅಂತೆ ಕುಣಿಯೋ ಬಡ್ಡಿ ಚಿಂತಾಕ ಇಕ್ಕಿರೆ ನಿಂತಾಳಾ

ತನ್ನ ಮನೆಗೆ ತವರ ನೆರೆಮನೆಗೆ ಕಬ್ಬಿಣ

ಸಂತೆಗೋಗೋ ಹೊತ್ತಿಗೆ ಮೂರು ಮೊಳ ನೇಯ್ಕೊಂಡು ಹೋದ್ರು

ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ

ಹುರುಳಿ ಉಳಿತರೆ ಜೋಳಕ್ಕೆ ಕಡೆ

ಒಕ್ಕಲಿಗನಿಗೆ ಎತ್ತು ಕುಂದಿದ್ರೆ ಎದೇನೇ ಕುಂದೋದಂತೆ

ಹೋದ ಕಿಟಿಕೀಲಿ ಅಂದ್ರೆ ಬಂದ ಗವಾಕ್ಷೀಲಿ

ಕಿವುಡನ್ನ ಮಾತಾಡ್ಸ್ ಬೇಡ, ಕಿಗ್ಗಾಳಿಗೆ ಅಡ್ಡ ಹೋಗ್ಬೇಡ

ಓದಿ ಓದಿ ಮರುಳಾದ ಕೂಚುಭಟ್ಟ, ಓದದಯೆ ನಮ್ಮ ರೈತ ಅನ್ನಕೊಟ್ಟ

ಹನಿ ಹನಿಗೂಡ್ದ್ರೆ ಹಳ್ಳ.. ತೆನೆ ತೆನೆಗೂಡ್ದ್ರೆ ಬಳ್ಳಾ..
ನೋಡಕ್ ಮಳ್ಳಿ ಇಕ್ಕಕ್ಕೊಳ್ಳಿ

ಬೆಟ್ಟಕ್ಕೆ ಶಾಟ ಕಟ್ಟಿ ಎಳಿದ್ರೆ, ಬಂದ್ರೆ ಬೆಟ್ಟ, ಹೋದ್ರೆ ಶಾಟ


ನರಿ ಕೂಗು ಗಿರಿ ಮುಟ್ಟುತ್ತಾ?

ಮಾವಂಗೆ ಮೊಳದುದ್ದ ಇದ್ರೆ., ಬಾಮೈದಂಗೆ ಏನ್ ಬಂತು ಸಂಪತ್ತು...?